
ಬೀಜಾಮೃತವು ನೈಸರ್ಗಿಕ ಅಥವಾ ಸಾವಯವ ಕೃಷಿಯಲ್ಲಿ ಬೀಜಗಳಿಗೆ ಬರುವ ರೋಗಗಳನ್ನು ತಡೆಯಲು ಮತ್ತು ಬೇರುಗಳ ಬೆಳವಣಿಗೆಯನ್ನು ಉತ್ತೇಜಿಸಲು ಬಳಸುವ ಅತ್ಯಂತ ಪ್ರಮುಖವಾದ ಬೀಜೋಪಚಾರದ (Seed Treatment) ಔಷಧಿಯಾಗಿದೆ.
ಬೇಕಾಗುವ ಸಾಮಗ್ರಿಗಳು.
- ಸ್ಥಳೀಯ ದೇಸಿ ಹಸುವಿನ ಸೆಳೆ (ಗೊಬ್ಬರ): 5 ಕೆ.ಜಿ
- ಸ್ಥಳೀಯ ದೇಸಿ ಹಸುವಿನ ಮೂತ್ರ: 5 ಲೀಟರ್
- ಸುಣ್ಣ: 50 ಗ್ರಾಂ (ವಿಶೇಷವಾಗಿ ಸುಣ್ಣದ ಕಲ್ಲು ಅಥವಾ ಹಂಚು ಸುಣ್ಣ)
- ಸ್ಥಳೀಯ ಹಸಿ ಊರಿನ ಹುದುಗಿಸಿದ ಮಣ್ಣು: 1 ಮುಷ್ಟಿ (ಮರ ಅಥವಾ ಹೊಲದ ಮೇಲ್ಪದರದ ಮಣ್ಣು)
- ನೀರು: 20 ಲೀಟರ್
ತಯಾರಿಸುವ ವಿಧಾನ.
- ಸೆಗಣಿ ಮತ್ತು ಮೂತ್ರದ ಮಿಶ್ರಣ: ಒಂದು ಪ್ಲಾಸ್ಟಿಕ ಅಥವಾ ಸಿಮೆಂಟ ತೊಟ್ಟಿಯಲ್ಲಿ 5 ಕೆ.ಜಿ ದೇಸಿ ಹಸುವಿನ ಸೆಗಣಿಯನ್ನು ತೆಗೆದುಕೊಂಡು, ಅದಕ್ಕೆ 5 ಲೀಟರ್ ಹಸುವಿನ ಮೂತ್ರವನ್ನು ಸೇರಿಸಿ ಚೆನ್ನಾಗಿ ಕಲಸಿ.
- ಸುಣ್ಣದ ಬಳಕೆ: ಮತ್ತೊಂದು ಪಾತ್ರೆಯಲ್ಲಿ 50 ಗ್ರಾಂ ಸುಣ್ಣವನ್ನು ಸ್ವಲ್ಪ ನೀರಿನಲ್ಲಿ ಹಾಕಿ ಚೆನ್ನಾಗಿ ಕರಗಿಸಿ (ಒಂದು ರಾತ್ರಿ ನೆನೆಸಿಟ್ಟರೆ ಇನ್ನೂ ಉತ್ತಮ). ನಂತರ ಇದನ್ನು ಸೆಗಣಿ-ಮೂತ್ರದ ಮಿಶ್ರಣಕ್ಕೆ ಸೇರಿಸಿ.
- ಮಣ್ಣು ಸೇರಿಸುವುದು: ಹೊಲದ ಅಥವಾ ಮರದ ಬುಡದ ಮೇಲ್ಪದರದ ಒಂದು ಮುಷ್ಟಿ ಫಲವತ್ತಾದ ಮಣ್ಣನ್ನು ಈ ಮಿಶ್ರಣಕ್ಕೆ ಹಾಕಿ.
- ನೀರು ಸೇರಿಸಿ ಕಲಸುವುದು: ಕೊನೆಯದಾಗಿ 20 ಲೀಟರ ನೀರನ್ನು ಹಾಕಿ ಎಲ್ಲಾ ಸಾಮಗ್ರಿಗಳು ಚೆನ್ನಾಗಿ ಮಿಶ್ರಗೊಳ್ಳುವಂತೆ ಮರದ ಕೋಲಿನಿಂದ ಗಡಿಯಾರದ ದಿಕ್ಕಿನಲ್ಲಿ (Clockwise) ಚೆನ್ನಾಗಿ ಕಲಕಿ.
- ಹುದುಗುವಿಕೆ (Fermentation): ಈ ಪಾತ್ರೆಯನ್ನು ಚೀಲ ಅಥವಾ ಬಟ್ಟೆಯಿಂದ ಮುಚ್ಚಿ ನೆರಳಿನಲ್ಲಿ ಇರಿಸಿ. ದಿನಕ್ಕೆ ಒಮ್ಮೆಯಾದರೂ ಇದನ್ನು ಮರದ ಕೋಲಿನಿಂದ ಕಲುಕಬೇಕು.
ಬಳಸುವ ವಿಧಾನ.
- 24 ಗಂಟೆಗಳ ನಂತರ ಈ ಬೀಜಾಮೃತ ಬಳಕೆಗೆ ಸಿದ್ಧವಾಗುತ್ತದೆ.
ಬಿತ್ತುವ ಅಥವಾ ನಾಟಿ ಮಾಡುವ ಮುನ್ನ ಬೀಜಗಳಿಗೆ ಅಥವಾ ಕಾಳುಗಳಿಗೆ ಈ ದ್ರಾವಣವನ್ನು ಲೇಪಿಸಿ, ನೆರಳಿನಲ್ಲಿ ಒಣಗಿಸಿ ನಂತರ ಬಿತ್ತನೆ ಮಾಡಬೇಕು
ಪ್ರಯೋಜನಗಳು.
- ಬಿತ್ತನೆ ಬೀಜಗಳ ಕಾರ್ಯಸಾಧ್ಯತೆಯನ್ನು ಹೆಚ್ಚಿಸುತ್ತದೆ.
- ಬೀಜದಿಂದ ಬರುವ ರೋಗಗಳನ್ನು ತಡೆಯುತ್ತದೆ.
Leave a Reply